Friday, October 18, 2024
Google search engine
Homeಕ್ರೀಡೆನಟಿಯರ ಜೊತೆ ಸಂಬಂಧ ಇದ್ದರೆ ಭಾರತ ತಂಡದಲ್ಲಿ ಸ್ಥಾನ: ಮಾಜಿ ಕ್ರಿಕೆಟಿಗ ಬಾಂಬ್!

ನಟಿಯರ ಜೊತೆ ಸಂಬಂಧ ಇದ್ದರೆ ಭಾರತ ತಂಡದಲ್ಲಿ ಸ್ಥಾನ: ಮಾಜಿ ಕ್ರಿಕೆಟಿಗ ಬಾಂಬ್!

ಬಾಲಿವುಡ್ ನ ಕೆಲವು ನಟಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದರೆ, ಮೈಮೇಲೆ ಟ್ಯಾಟೊ ಹಾಕಿಸಿಕೊಂಡರೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತೆ ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್ ಮನ್ ಎಸ್.ಬದರಿನಾಥ್ ಬಾಂಬ್ ಸಿಡಿಸಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಮುಂತಾದ ಆಟಗಾರರು ಆಯ್ಕೆ ಆಗದೇ ಇರುವುದಕ್ಕೆ ಕಾರಣ ಅವರು ತಮ್ಮ ವ್ಯಕ್ತಿತ್ವವನ್ನು ಕೆಟ್ಟದಾಗಿ ತೋರಿಸಿಕೊಳ್ಳದೇ ಇರುವುದು ಎಂದು ಹೇಳಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಕೆಲವು ನಟಿಯರ ಜೊತೆ ಸಂಬಂಧ ಇಟ್ಟುಕೊಳ್ಳಬೇಕು. ಮೈಮೇಲೆ ಟ್ಯಾಟೊಗಳನ್ನು ಹಾಕಿಸಿಕೊಳ್ಳಬೇಕು. ಹಾಗೆ ಮಾಡದೇ ಇರುವ ಕಾರಣಕ್ಕೆ ಗಾಯಕ್ವಾಡ್, ರಿಂಕು ಸಿಂಗ್ ರೀತಿಯ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಸಿಕ್ಕ ಅವಕಾಶದಲ್ಲಿ ಗಾಯಕ್ವಾಡ್ ಮತ್ತು ರಿಂಕು ಸಿಂಗ್ ಯಾವುದೇ ತಪ್ಪು ಮಾಡಿಲ್ಲ. ಅವರಿಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಸೂರ್ಯಕುಮಾರ್ ಗೆ ನಾಯಕ ಪಟ್ಟ ಏಕೆ ಕೊಟ್ಟರು ಎಂಬುದು ತಿಳಿಯುತ್ತಿಲ್ಲ. ಶುಭಮನ್ ಗಿಲ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಇದ್ದರು ಎಂದು ಬದರೀನಾಥ್ ವಿವರಿಸಿದರು.

ಋತುರಾಜ್ ಗಾಯಕ್ವಾಡ್ ಜಿಂಬಾಬ್ವೆ ಸರಣಿಯಲ್ಲಿ 7, 77 ಮತ್ತು 49 ರನ್ ಬಾರಿಸಿದ್ದರು. ಸರಣಿಯ 5ನೇ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಆದರೆ ಶ್ರೀಲಂಕಾ ಸರಣಿಯಿಂದ ಋತುರಾಜ್ ಅವರನ್ನು ಕೈಬಿಡಲಾಗಿದೆ. ರಿಂಕು ಸಿಂಗ್ ಗೆ ಟಿ-20 ತಂಡದಲ್ಲಿ ಸ್ಥಾನ ಸಿಕ್ಕರೂ ಏಕದಿನದಿಂದ ಕೈಬಿಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments