ಇಲಿಗಳು ಕಚ್ಚಿದ್ದರಿಂದ ಎರಡು ಹೆಣ್ಣು ನವಜಾತ ಶಿಶುಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ರಾಜಧಾನಿ ಇಂದೋರ್ ನಲ್ಲಿ ನಡೆದಿದೆ.
ಇಂದೋರ್ನ ಮಹಾರಾಜ ಯಶ್ವಂತರಾವ್ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿದ್ದ ನವಜಾತ ಶಿಶು ಬುಧವಾರ ಮಧ್ಯಾಹ್ನ ಮೃತಪಟ್ಟಿದೆ. ಇದರಿಂದ ಇಲಿ ಕಚ್ಚಿದ್ದರಿಂದ ಮೃತಪಟ್ಟ ನವಜಾತ ಶಿಶುಗಳ ಸಂಖ್ಯೆ ೨ಕ್ಕೇರಿದೆ.
ಖಂಡ್ವಾದಿಂದ ಬಂದ ಎರಡನೇ ಹೆಣ್ಣು ಮಗು ಲಕ್ಷ್ಮೀ ಮೃತಪಟ್ಟಿದೆ. ಒಂದು ದಿನದ ಹಿಂದೆಯಷ್ಟೇ ದೇವಾಸ್ ನಿಂದ ಬಂದ ರೆಹನಾ ಎಂಬ ಹೆಸರಿನ ಶಿಶು ಮೃತಪಟ್ಟಿತ್ತು.
ಅನಾರೋಗ್ಯಕ್ಕೆ ಒಳಗಾಗಿದ್ದ ಎರಡೂ ಮಕ್ಕಳನ್ನು ಕುಟುಂಬದವರು ಚಿಕಿತ್ಸೆಗಾಗಿ ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ದಾಖಲಿಸಿದ್ದ ವೇಳೆ ಎರಡೂ ಮಕ್ಕಳು ಇಲಿಗಳು ಕಚ್ಚಿದ್ದರಿಂದ ಮೃತಪಟ್ಟಿವೆ. ಇದರಿಂದ ಎರಡು ಕುಟುಂಬಗಳು ಆಘಾತಕ್ಕೆ ಒಳಗಾಗಿವೆ.
ಬುಧವಾರ ಇಂದೋರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಎಂ.ವೈ ಆಸ್ಪತ್ರೆಯ ಘಟನೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಿದರು ಮತ್ತು ಸರ್ಕಾರ ಅಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಮಕ್ಕಳು ಇಲಿಗಳು ಕಡಿತದಿಂದ ಸತ್ತಿಲ್ಲ, ಆದರೆ ಜನ್ಮಜಾತ ತೊಡಕುಗಳಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ. ಎಂ.ವೈ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅಶೋಕ್ ಯಾದವ್ ಹೇಳಿದರು: “ಎರಡೂ ಮಕ್ಕಳು ನವಜಾತ ಶಿಶುಗಳು ರಕ್ತಹೀನತೆಯಿಂದ ಸಾವನ್ನಪ್ಪಿವೆ ಮತ್ತು ಅವರನ್ನು ಹೊರಗಿನಿಂದ ಕಳುಹಿಸಲಾಗಿದೆ.
ಒಬ್ಬರ ತೂಕ 1 ಕೆಜಿ ಮತ್ತು ಇನ್ನೊಬ್ಬರ ತೂಕ 1.6 ಕೆಜಿ ಮತ್ತು ಹಿಮೋಗ್ಲೋಬಿನ್ ಕೂಡ ಕಡಿಮೆಯಾಗಿದೆ. ಮಕ್ಕಳ ಮೇಲೆ ಕಚ್ಚಿದ ಗುರುತುಗಳು ಕಂಡುಬಂದವು ಆದರೆ ಅವು ಸಾವಿಗೆ ಕಾರಣವಾಗುವುದಿಲ್ಲ. ಒಬ್ಬರು ಸಾವನ್ನಪ್ಪಿದರು, ಆದರೆ ಇನ್ನೊಬ್ಬರು ಕರುಳಿನ ಬೆಳವಣಿಗೆಯಲ್ಲಿಲ್ಲದ ಗಂಭೀರ ಸ್ಥಿತಿಯಲ್ಲಿದ್ದರು ಎಂದು ಹೇಳಿಕೆ ನೀಡಿದ್ದಾರೆ.



