Thursday, October 3, 2024
Google search engine
Homeತಾಜಾ ಸುದ್ದಿದೇಶಕ್ಕೆ ಯಾವ ಪಿತಾಮಹ ಇಲ್ಲ: ಕಂಗನಾ ರಾಣವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ದೇಶಕ್ಕೆ ಯಾವ ಪಿತಾಮಹ ಇಲ್ಲ: ಕಂಗನಾ ರಾಣವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ಬಿಜೆಪಿ ಹೈಕಮಾಂಡ್ ನಿಂದಲೇ ಪದೇಪದೇ ಎಚ್ಚರಿಕೆ ನೀಡಿದರೂ ಬುದ್ದಿ ಕಲಿಯದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಹಾತ್ಮ ಗಾಂಧೀಜಿ ಅವರ ಜಯಂತಿ ದಿನದಂದು ಪೋಸ್ಟ್ ಮಾಡಿ, ದೇಶಕ್ಕೆ ಯಾವುದೇ ಪಿತಾಮಹ ಇಲ್ಲ. ಕೇವಲ ಮಕ್ಕಳು ಮಾತ್ರ ಇದ್ದಾರೆ. ಮಕ್ಕಳನ್ನು ಪಡೆದ ಭಾರತ್ ಮಾತಾ ಧನ್ಯಳು ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಮಹಾತ್ಮ ಗಾಂಧೀಜಿ ಅವರ ದೇಶದ ಸ್ವಚ್ಚತೆ ಕುರಿತ ಕಾಳಜಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿಗೆ ಶುಭ ಕೋರಿರುವ ಕಂಗನಾ ಮಹಾತ್ಮಾ ಗಾಂಧೀಜಿಯ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಾಣವತ್ ಪೋಸ್ಟ್ ಗೆ ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಗೋಡ್ಸೆ ಸಂಸ್ಕೃತಿಯ ಬಿಜೆಪಿ ಸಂಸದೆ ಬಾಪೂಜಿ ಮತ್ತು ಶಾಸ್ತ್ರೀಜಿ ನಡುವೆ ಕಂದಕ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿಗಳು ಗೋಡ್ಸೆ ಪೂಜೆ ಆರಂಭಿಸುತ್ತಾ? ದೇಶಕ್ಕೆ ಪಿತಾಮಹ ಇದ್ದಾರೆ. ಮಕ್ಕಳು ಇದ್ದಾರೆ, ತ್ಯಾಗಿಗಳು ಇದ್ದಾರೆ ಎಲ್ಲರಿಗೂ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ರೈತರ ಬೆಂಬಲ ಬೆಲೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಂಗನಾಗೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments