ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸೃಷ್ಟಿಯಾಗಿದ್ದು, 10 ಮಂದಿ ಒಂದೇ ಬಾರಿಗೆ ಕೊಚ್ಚಿ ಹೋದ ಭೀಕರ ಘಟನೆ ನಡೆದಿದೆ.
ವೀಡಿಯೋದಲ್ಲಿ ಉಕ್ಕಿ ಹರಿಯತ್ತಿದ್ದ ಪ್ರವಾಹದ ನಡುವೆ 10 ಮಂದಿ ಟ್ರ್ಯಾಕ್ಟರ್ ಆಶ್ರಯ ಪಡೆದಿದ್ದರು. ಆದರೆ ನೀರಿನ ವೇಗ ಹೆಚ್ಚಾದಂತೆ ಆಶ್ರಯ ಪಡೆದಿದ್ದ 10 ಮಂದಿ ನೋಡ ನೋಡುತ್ತಿದ್ದಂತೆ ಕೂಡ ಕೊಚ್ಚಿ ಹೋಗಿ ಎಲ್ಲರೂ ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ತಪೋವನ್, ಸಹಸ್ತ್ರಧಾರಾದಲ್ಲಿರುವ ಐಟಿ ಪಾರ್ಕ್ ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ಸಿಎಂ ಜೊತೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದು, ಕೇಂದ್ರ ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಡೆಹ್ರಾಡೂನ್ ನ ಲ್ಲಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಾನಿಯ ಪ್ರಮಾಣದ ಅಂದಾಜು ನಡೆಯುತ್ತಿದೆ.
HAPPENING NOW: A devastating cloudburst triggered a dangerous rise in the river, sweeping away several people in a tractor-trolley. Authorities are on high alert as rescue operations continue in Vikasnagar, Dehradun, Uttarakhand, india. pic.twitter.com/eRE5sGT8GH
— Weather Monitor (@WeatherMonitors) September 16, 2025


