Sunday, May 31, 2026
Google search engine
Homeರಾಜ್ಯಮೌಲ್ವಿಗಳಿಗೆ ಚುಡಾಯಿಸಿದ ಯುವಕರು: ಬೀದರ್ ಪೊಲೀಸ್ ಠಾಣೆಗೆ ಮುತ್ತಿಗೆ

ಮೌಲ್ವಿಗಳಿಗೆ ಚುಡಾಯಿಸಿದ ಯುವಕರು: ಬೀದರ್ ಪೊಲೀಸ್ ಠಾಣೆಗೆ ಮುತ್ತಿಗೆ

ಮೌಲ್ವಿಗಳಿಗೆ ಹಿಂದೂ ಯುವಕರು ಚುಡಾಯಿಸಿ ಹಲ್ಲೆ ಮಾಡಿದ್ದರಿಂದ ಮುಸ್ಲಿಮ್ ಸಮುದಾಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುಸ್ಲಿಂ ಸಮುದಾಯದ ಜನರು ಮುತ್ತಿಗೆ ಹಾಕಲಾಗಿತ್ತು. ಮೌಲ್ವಿಗಳನ್ನು ಚುಡಾಯಿಸಿದ ಯುವಕರನ್ನು ಬಂಧಿಸಿ ಎಂದು ಆಗ್ರಹಿಸಿ ಠಾಣೆ ಎದುರು ಹೈಡ್ರಾಮಾ ಸೃಷ್ಟಿಸಿದ್ದರೆನ್ನಲಾಗಿದೆ.

ತಡರಾತ್ರಿ ಬಸವಕಲ್ಯಾಣ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಐಜಿ, ಎಸ್ಪಿ ಸೇರಿ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಮುಸ್ಲಿಂ ಸಮುದಾಯದ ನೂರಾರು ಜನ ಠಾಣೆಗೆ ಮುತ್ತಿಗೆ ಹಾಕಿದ್ದರು.

ಜಮಾವಣೆಗೊಂಡ ಜನರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಘಟನೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಕೆಲ ವಸ್ತುಗಳಿಗೂ ಹಾನಿಯಾಗಿದೆ ಎನ್ನಲಾಗಿದೆ. ಘಟನೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ನೀಡಲು ಪೊಲೀಸರು ಹಿಂದೇಟು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments