Thursday, September 19, 2024
Google search engine
Homeತಾಜಾ ಸುದ್ದಿದರ್ಶನ್ ಗೆ ರಾಜಾತಿಥ್ಯದ ಫೋಟೊ ನಂತರ ವೀಡಿಯೋ ಬಹಿರಂಗ: ವೀಡಿಯೋ ಕಾಲ್ ನಲ್ಲಿ ಹರಟೆ!

ದರ್ಶನ್ ಗೆ ರಾಜಾತಿಥ್ಯದ ಫೋಟೊ ನಂತರ ವೀಡಿಯೋ ಬಹಿರಂಗ: ವೀಡಿಯೋ ಕಾಲ್ ನಲ್ಲಿ ಹರಟೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ದೊರೆಯುತ್ತಿರುವ ವೀಡಿಯೋ ಬಹಿರಂಗಗೊಂಡು ವಿವಾದ ಸೃಷ್ಟಿಸಿ ಬೆನ್ನಲ್ಲೇ ಮತ್ತೊಂದು ವೀಡಿಯೋ ಬಹಿರಂಗಗೊಂಡಿದೆ.

ದರ್ಶನ್ ಚೇರ್ ನಲ್ಲಿ ಕೂತು ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದಿರುವ ಫೋಟೊ ಬಹಿರಂಗಗೊಂಡಿತ್ತು. ಇದರಿಂದ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ಸಿಗದ ವಿಶೇಷ ಉಪಚಾರ, ಸೌಲಭ್ಯ ಸಿಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ವೀಡಿಯೋ ಬಹಿರಂಗವಾಗಿದೆ.

ಸ್ಪೆಷಲ್​ ಬ್ಯಾರಕ್​ನಲ್ಲಿ ಇರುವ ದರ್ಶನ್​ ಅವರಿಗೆ ವಿಡಿಯೋ ಕಾಲ್​ ಸೌಲಭ್ಯವನ್ನೂ ನೀಡಲಾಗಿದೆ. ಹಳದಿ ಟೀ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬನ ಜೊತೆ ದರ್ಶನ್ ವೀಡಿಯೊ ಕಾಲ್ ನಲ್ಲಿ ಮಾತನಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೆಡ್ಡಿ ಎಂಬಾತ‌ನ ಸ್ಟೇಟಸ್​ನಲ್ಲಿ ವಿಡಿಯೋ ಮೊದಲ ಬಾರಿ ಪತ್ತೆಯಾಗಿದ್ದು, ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಆತನಿಗೆ ಹೇಳಿದ ವೀಡಿಯೋ ತುಣುಕು ಇದಾಗಿದೆ. ಜೈಲಿನಲ್ಲಿ ಇರುವ ಬೇರೊಬ್ಬ ಖೈದಿಯ ಮೊಬೈಲ್‌ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments