Friday, May 15, 2026
Google search engine
Homeರಾಜ್ಯಬೆಳಗಾವಿಯಲ್ಲಿ ಅಮಾನವೀಯ ಘಟನೆ: ಪ್ರೀತಿಸಿ ಮದುವೆ ಆಗಿದ್ದಕ್ಕೆ 2 ಕುಟುಂಬಗಳಿಗೆ ಬಹಿಷ್ಕಾರ, 11,000 ರೂ. ದಂಡ

ಬೆಳಗಾವಿಯಲ್ಲಿ ಅಮಾನವೀಯ ಘಟನೆ: ಪ್ರೀತಿಸಿ ಮದುವೆ ಆಗಿದ್ದಕ್ಕೆ 2 ಕುಟುಂಬಗಳಿಗೆ ಬಹಿಷ್ಕಾರ, 11,000 ರೂ. ದಂಡ

ಬೆಳಗಾವಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೀಡಗಲಿ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ಕಳೆದ ಎರಡು ವರ್ಷಗಳಿಂದ ಅಮಾನವೀಯವಾಗಿ ‘ಸಾಮಾಜಿಕ ಬಹಿಷ್ಕಾರ’ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ನರಕಸದೃಶ ಜೀವನ:

ಕೀರ್ತಿ ಹಾಗೂ ಭೂತನಾಥ ಎಂಬುವವರು 2022ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮದ ಪ್ರಮುಖರು, ಅವರ ಕುಟುಂಬಗಳ ಮೇಲೆ ಕಟ್ಟುನಿಟ್ಟಿನ ಬಹಿಷ್ಕಾರ ಹೇರಿದ್ದಾರೆ. ಈ ಕುಟುಂಬಗಳೊಂದಿಗೆ ಮಾತನಾಡಿದರೆ 11,000 ರೂ. ದಂಡ ವಿಧಿಸುವ ಫರ್ಮಾನು ಹೊರಡಿಸಲಾಗಿದೆ. ಕುಡಿಯುವ ನೀರು, ದೇವಸ್ಥಾನ ಪ್ರವೇಶ ಹಾಗೂ ಅಂಗನವಾಡಿ ಸೌಲಭ್ಯವನ್ನೂ ಇವರಿಗೆ ನಿರಾಕರಿಸಲಾಗಿದೆ.

ಅಮಾನವೀಯತೆಯ ಪರಾಕಾಷ್ಠೆ:

ಭೂತನಾಥ ಅವರ ತಂದೆ ನಿಧನರಾದಾಗ ಅಂತಿಮ ಸಂಸ್ಕಾರಕ್ಕೂ ಅಡ್ಡಿಪಡಿಸಿ, ಸ್ಮಶಾನ ಬಳಸಲು 3,100 ರೂ. ದಂಡ ವಸೂಲಿ ಮಾಡಲಾಗಿದೆ ಎಂಬ ಆಘಾತಕಾರಿ ದೂರು ಕೇಳಿಬಂದಿದೆ.
ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಡಿ.ಎಸ್.ಎಸ್ ಎಚ್ಚರಿಕೆ:

ಈ ಅನಿಷ್ಟ ಪದ್ಧತಿಯ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂತ್ರಸ್ತರಿಗೆ ನ್ಯಾಯ ಒದಗಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ತಹಶೀಲ್ದಾರರಿಗೆ ಎಚ್ಚರಿಕೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments