Monday, May 6, 2024
Google search engine
Homeತಾಜಾ ಸುದ್ದಿಜೈ ಶ್ರೀರಾಮ್ ಅಂತ ಕೈ ಎತ್ತಿ 36,000 ರೂ. ಕಳೆದುಕೊಂಡ `ರಾಮ’ ಅರುಣ್ ಗೋವಿಲ್!

ಜೈ ಶ್ರೀರಾಮ್ ಅಂತ ಕೈ ಎತ್ತಿ 36,000 ರೂ. ಕಳೆದುಕೊಂಡ `ರಾಮ’ ಅರುಣ್ ಗೋವಿಲ್!

ರಾಮಾಯಣ ಧಾರವಾಹಿಯ ರಾಮನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಪ್ರಚಾರದ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲೂ ಎರಡೂ ಕೈ ಎತ್ತಿದ ಸಂದರ್ಭದಲ್ಲಿ ಜೇಬಿನಲ್ಲಿದ್ದ 36,000 ರೂ. ಕಳೆದುಕೊಂಡಿದ್ದಾರೆ!

ಉತ್ತರ ಪ್ರದೇಶದ ಮೀರತ್ ನಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಉದ್ಯಮಿ ಕುಲಭೂಷಣ್ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದಾಗ ಅರುಣ್ ಗೋವಿಲ್ ಅವರ ಎರಡೂ ಕೈಗಳನ್ನು ಎತ್ತಿದರು. ಈ ವೇಳೆ ಸುತ್ತಮುತ್ತ ನೆರೆದಿದ್ದವರು ಜೇಬಿನಲ್ಲಿದ್ದ ದುಡ್ಡು, ಮೊಬೈಲ್ ಎಲ್ಲವನ್ನೂ ದೋಚಿದ್ದಾರೆ.

ಅರುಣ್ ಗೋವಿಲ್ ಮಾತ್ರವಲ್ಲ, ಕೈ ಎತ್ತಿದ ಉದ್ಯಮಿ ಕುಲಭೂಷಣ್ ಅವರ ಹಣ ಹಾಗೂ ಮೊಬೈಲ್ ಅನ್ನು ಕೂಡ ದುಷ್ಕರ್ಮಿಗಳು ದೋಚಿದ್ದಾರೆ. ಪತ್ರಕರ್ತರದ್ದೂ ಹಣ ದೋಚಲಾಗಿದೆ.

90ರ ದಶಕದ ಜನಪ್ರಿಯ ಧಾರವಾಹಿ ಆಗಿದ್ದ ರಾಮಾಯಣದಲ್ಲಿ ಅರುಣ್ ಗೋವಿಲ್ ರಾಮನ ಪಾತ್ರ ನಿಭಾಯಿಸಿ ಜನಪ್ರಿಯರಾಗಿದ್ದರು. ಈ ಜನಪ್ರಿಯತೆ ಹಿನ್ನೆಲೆಯಲ್ಲಿಯೇ ಬಿಜೆಪಿ ಟಿಕೆಟ್ ಪಡೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments