Wednesday, November 12, 2025
Google search engine
Homeತಾಜಾ ಸುದ್ದಿBREAKING ಕೇಂದ್ರ ಚುನಾವಣಾ ಆಯುಕ್ತರ ಹೆಲಿಕಾಫ್ಟರ್ ಉತ್ತರಾಖಂಡ್ ನಲ್ಲಿ ತುರ್ತು ಭೂಸ್ಪರ್ಶ!

BREAKING ಕೇಂದ್ರ ಚುನಾವಣಾ ಆಯುಕ್ತರ ಹೆಲಿಕಾಫ್ಟರ್ ಉತ್ತರಾಖಂಡ್ ನಲ್ಲಿ ತುರ್ತು ಭೂಸ್ಪರ್ಶ!

ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಮತ್ತು ಉತ್ತರಾಖಂಡ್ ನ ಹೆಚ್ಚುವರಿ ಚುನಾವಣಾ ಅಧಿಕಾರಿ  ವಿಯಜ್ ಕುಮಾರ್ ಜೊಗ್ದಾಂಡೆ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಉತ್ತರಾಖಂಡ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಉತ್ತರಾಖಂಡ್ ನ ಪಿತೋರಾಗಢ್ ನಲ್ಲಿ ಬುಧವಾರ ಸಂಜೆ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಹೆಲಿಕಾಫ್ಟರ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರಾಖಂಡ್ ನ ರುದ್ರಪ್ರಯಾಗ್ ಜಿಲ್ಲೆಯ ಕೇದಾರ್ ನಾಥ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಮಂಗಳವಾರ ಘೋಷಿಸಿದ್ದ ಕೇಂದ್ರ ಚುನಾವಣಾ ಆಯುಕ್ತರು ಇಂದು ಚುನಾವಣಾ ಸಿದ್ಧತೆ ಕುರಿತು ಪರಿಶೀಲನೆಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.

ಹೆಲಿಕಾಫ್ಟರ್ ತುರ್ತು ಭೂಸ್ಪರ್ಶಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯವೋ ಅಥವಾ ತಾಂತ್ರಿಕ ದೋಷವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments