ಮನುಷ್ಯರು ಸಾಮಾನ್ಯವಾಗಿ ಜೀವನದಲ್ಲಿ ಅನುಸರಿಸುವ ಮಾನವ್ ( MANAV) ಮಂತ್ರವನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನದಲ್ಲೂ ಬಳಸಿದರೆ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ೨೦೨೬ ಸಮಾವೇಶದಲ್ಲಿ ಗುರುವಾರ ಭಾಷಣ ಮಾಡಿದ ಪ್ರಧಾನಿ ಮಾನವ್- ನೈತಿಕ ಮತ್ತು ನೈತಿಕ ವ್ಯವಸ್ಥೆ; ಜವಾಬ್ದಾರಿಯುತ ಆಡಳಿತ; ರಾಷ್ಟ್ರೀಯ ಸಾರ್ವಭೌಮತ್ವ, ವಿಶೇಷವಾಗಿ ದತ್ತಾಂಶದ ಹಕ್ಕು; ಪ್ರವೇಶಿಸಬಹುದಾದ ಮತ್ತು ಅಂತರ್ಗತ ತಂತ್ರಜ್ಞಾನ; ಮತ್ತು ಮಾನ್ಯ ಮತ್ತು ಕಾನೂನುಬದ್ಧ ವ್ಯವಸ್ಥೆಗಳನ್ನು ಪಾಲಿಸಬೇಕು ಎಂದರು.
ಎಐ ಭವಿಷ್ಯದ ತಂತ್ರಜ್ಞಾನವಾಗಿದ್ದು, ಪಾರದರ್ಶಕತೆ ಹೊಂದಿದ್ದರೆ ಈ ತಂತ್ರಜ್ಞಾವನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.



