Monday, June 8, 2026
Google search engine
Homeರಾಜ್ಯರಾಜೀವ್ ಗೌಡಗೆ ನ್ಯಾಯಾಂಗ ಬಂಧನ: ಹೈಡ್ರಾಮ ಸೃಷ್ಟಿಸಿದ ಬೆಂಬಲಿಗರಿಗೆ ಪೊಲೀಸರ ಲಾಠಿ ಏಟು!

ರಾಜೀವ್ ಗೌಡಗೆ ನ್ಯಾಯಾಂಗ ಬಂಧನ: ಹೈಡ್ರಾಮ ಸೃಷ್ಟಿಸಿದ ಬೆಂಬಲಿಗರಿಗೆ ಪೊಲೀಸರ ಲಾಠಿ ಏಟು!

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಉಚ್ಚಾಟಿತ ನಾಯಕ ರಾಜೀವ್ ಗೌಡಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪೌರಾಯುಕ್ತೆ ನಿರ್ಮಲಾ ಗೌಡ ಅವರಿಗೆ ನಿಂದಿಸಿದ ರಾಜೀವ್​​ ಗೌಡ ಅವರನ್ನು ಕೇರಳದಲ್ಲಿ ಬಂಧಿಸಿದ್ದ ಶಿಡ್ಲಘಟ್ಟ ಪೊಲೀಸರು ಮಂಗಳವಾರ ಶಿಡ್ಲಘಟ್ಟ ಜೆಎಂಎಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ರಾಜೀವ್​ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು  ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿತು.

ಬೆಂಬಲಿಗರಿಗೆ ಲಾಠಿ ರುಚಿ

ರಾಜೀವ್​​ ಗೌಡ ಜಾಮೀನು ರದ್ದಾದರೂ ಆತನ ಬೆಂಬಲಿಗರು ರಾಜೀವ್ ಗೌಡ ಪರ ಘೋಷಣೆ ಕೂಗಿ ಸಂಭ್ರಮ ಆಚರಿಸಿದ್ದರಿಂದ ಕೋರ್ಟ್ ಮುಂದೆ ಕೆಲಕಾಲ ಹೈಡ್ರಾಮ  ಸೃಷ್ಟಿಯಾಗಿದ್ದು, ಪೊಲೀಸರು ಲಾಠಿಪ್ರಹಾರ ನಡೆಸಿ ಬೆಂಬಲಿಗರನ್ನು ಓಡಿಸಿದರು.

ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡಗೆ ಬ್ಯಾನರ್​ ವಿಚಾರವಾಗಿ ಫೋನ್​ನಲ್ಲಿ ರಾಜೀವ್​​ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಅಷ್ಟೇ ಅಲ್ಲದೇ ಜೀವ ಬೆದರಿಕೆ ಹಾಕಿದ್ದನು. ಈ ಘಟನೆ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರಾಜೀವ್​ ಗೌಡ, ಸೋಮವಾರ ಅರೆಸ್ಟ್​ ಆಗಿದ್ದನು. ಮಂಗಳವಾರ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ರಾಜೀವ್​ ಗೌಡ, ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments