Home ಕ್ರೀಡೆ ಹಿಂಸೆಗೆ ತಿರುಗಿದ ಫುಟ್ಬಾಲ್ ಪಂದ್ಯ: ರೆಫರಿ ನಿರ್ಣಯಕ್ಕೆ 100 ಮಂದಿ ಬಲಿ!

ಹಿಂಸೆಗೆ ತಿರುಗಿದ ಫುಟ್ಬಾಲ್ ಪಂದ್ಯ: ರೆಫರಿ ನಿರ್ಣಯಕ್ಕೆ 100 ಮಂದಿ ಬಲಿ!

ಕೊನಾಕ್ರಿ: ಫುಟ್ಬಾಲ್ ಪಂದ್ಯವೊಂದು ಅಭಿಮಾನಿಗಳ ನಡುವೆ ಹಿಂಸಾತ್ಮಕ ಮಾರಾಮಾರಿಗೆ ಕಾರಣವಾಗಿ ಸಂಬಂಧಿತ ಬಡಿದಾಟದಲ್ಲಿ ನೂರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡ ಘೋರ ದುರಂತ ಗಿನಿ ದೇಶದಲ್ಲಿ ನಡೆದಿದೆ.

by Editor
0 comments
football

ಕೊನಾಕ್ರಿ: ಫುಟ್ಬಾಲ್ ಪಂದ್ಯವೊಂದು ಅಭಿಮಾನಿಗಳ ನಡುವೆ ಹಿಂಸಾತ್ಮಕ ಮಾರಾಮಾರಿಗೆ ಕಾರಣವಾಗಿ ಸಂಬಂಧಿತ ಬಡಿದಾಟದಲ್ಲಿ ನೂರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡ ಘೋರ ದುರಂತ ಗಿನಿ ದೇಶದಲ್ಲಿ ನಡೆದಿದೆ.

ಪಶ್ಚಿಮ ಆಫ್ರಿಕಾದಲ್ಲಿರುವ ದೇಶದ ಎರಡನೇ ಅತಿ ದೊಡ್ಡ ನಗರವಾದ ಎನ್ಝೆರೆಕೋರೆಯಲ್ಲಿ ಭಾನುವಾರ ಫುಟ್ಬಾಲ್ ಪಂದ್ಯದ ವೇಳೆ ಈ ಘರ್ಷಣೆ ನಡೆದಿದೆ.

“ಆಸ್ಪತ್ರೆಯ ಮೂಲೆ ಮೂಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲ ದೇಹಗಳನ್ನು ಸಾಲಾಗಿ ಇರಿಸಿರುವುದು ಕಾಣಿಸುತ್ತದೆ. ಶವಾಗಾರಗಳು ಭರ್ತಿಯಾಗಿವೆ. ಗಾಯಾಳುಗಳು ಹಜಾರಗಳಲ್ಲಿ ಮಲಗಿದ್ದಾರೆ” ಎಂದು ಆಸ್ಪತ್ರೆಯೊಂದರ ವೈದ್ಯರು ತಿಳಿಸಿದ್ದಾರೆ.

“ಸುಮಾರು ನೂರು ಮಂದಿ ಸತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಸ್ಥಳೀಯ ಆಸ್ಪತ್ರೆ ಹಾಗೂ ಶವಾಗಾರದಲ್ಲಿ ಶವಗಳು ತುಂಬಿಕೊಂಡಿವೆ. ಆದರೆ ಸಾವು, ನೋವಿನ ನಿಖರವಾದ ಸಂಖ್ಯೆ ಬಹಿರಂಗವಾಗಿಲ್ಲ.

banner

ಮೈದಾನದ ಹೊರಭಾಗದಲ್ಲಿನ ಬೀದಿಗಳಲ್ಲಿ ಭಾರಿ ಗದ್ದಲದ ಸನ್ನಿವೇಶ ಏರ್ಪಟ್ಟಿರುವುದು ಮತ್ತು ಲೆಕ್ಕಕ್ಕೆ ಸಿಗದಷ್ಟು ಶವಗಳು ನೆಲದ ಮೇಲೆ ಅನಾಥವಾಗಿ ಬಿದ್ದಿರುವ ಎದೆನಡುಗಿಸುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ರೆಫರಿಯ ವಿವಾದಾತ್ಮಕ ನಿರ್ಣಯದ ಬಳಿಕ ವಾಗ್ವಾದ ಶುರುವಾಗಿತ್ತು. ಇದು ವಿಕೋಪಕ್ಕೆ ತಿರುಗಿ, ಅಭಿಮಾನಿಗಳು ಮೈದಾನದ ಒಳಗೆ ನುಗ್ಗಿದ್ದರು. ಫುಟ್ಬಾಲ್ ಮೋಜಿನ ಆಟದ ಸ್ಟೇಡಿಯಂ ರಣರಂಗವಾಗಿ ಮಾರ್ಪಟ್ಟಿದೆ.

ರೆಫರಿ ತೀರ್ಮಾನ ಅಭಿಮಾನಿಗಳಲ್ಲಿ ಅಸಮಾಧಾನ ಉಂಟುಮಾಡಿತ್ತು. ಇದರಿಂದ ಉದ್ರಿಕ್ತರಾದ ಪ್ರೇಕ್ಷಕರು ಸಂಘರ್ಷಕ್ಕೆ ಇಳಿದರು. ಬೀದಿ ಬೀದಿಗಳಲ್ಲಿ ಮಾರಾಮಾರಿ ನಡೆದಿದ್ದು, ಎನ್ಜೆರೆಕೋರೆ ಪೊಲೀಸ್ ಠಾಣೆಗೆ ಕೂಡ ಬೆಂಕಿ ಹಚ್ಚಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ ಫಿನಾಲೆ ಹೊಸ್ತಿಲಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್! ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ? ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಪ್ರತಿಭಟನೆ ಬಿಸಿ: ಬೀದಿಗಿಳಿದ ಸಾವಿರಾರು ಅಮೆರಿಕನ್ನರು ಫೆ.14ರಂದು ರೈತರ ಬೇಡಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ: ವೈದ್ಯ ನೆರವು ಪಡೆಯಲು ಜಗಜೀತ್ ಒಪ್ಪಿಗೆ ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿರಿಸಿದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ: ಮೊದಲ ಫೋಟೊ ಬಿಡುಗಡೆ ಕೇಂದ್ರ ಆದಿವಾಸಿ ಜನಜಾತಿ ನ್ಯಾಯ ಅಭಿಯಾನಕ್ಕೆ ಮಂಡ್ಯದ ಪೂವನಹಳ್ಳಿ ಆಯ್ಕೆ: ಎಚ್.ಡಿ. ಕುಮಾರಸ್ವಾಮಿ ಘೋಷಣೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅಜ್ಜಿ, ಚಿಕ್ಕಪ್ಪ ಅಪಘಾತದಲ್ಲಿ ದುರ್ಮರಣ ಮಹಾಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ: ಹಲವು ಶಿಬಿರಗಳಿಗೆ ವ್ಯಾಪಿ ಬಿಜೆಪಿ ಬಣ ಕಿತ್ತಾಟಕ್ಕೆ ಟ್ವಿಸ್ಟ್: ಪ್ರಧಾನ ಕಾರ್ಯದರ್ಶಿ ಸ್ಥಾನ ಒಲ್ಲೆ ಅಂದ ಶಾಸಕ ಸುನೀಲ್ ಕುಮಾರ್!