Thursday, September 19, 2024
Google search engine
Homeತಾಜಾ ಸುದ್ದಿಲಂಚ ತಗೋ, ಬೈಯ್ಯಲು ನಾವು ಹೇಳಿದ್ವಾ: ಡಿಕೆ ಸುರೇಶ್ ತಿರುಗೇಟು

ಲಂಚ ತಗೋ, ಬೈಯ್ಯಲು ನಾವು ಹೇಳಿದ್ವಾ: ಡಿಕೆ ಸುರೇಶ್ ತಿರುಗೇಟು

ಬಿಜೆಪಿ ಶಾಸಕ ಮುನಿರತ್ನ ಪ್ರಕರಣವನ್ನು ರಾಜಕೀಯ ಮಾಡಲಾಗುತ್ತಿದೆ. ನಾವೇನು ಲಂಚ ತಗೊ, ಗುತ್ತಿಗೆದಾರನಿಗೆ ನಿಂದಿಸು ಅಂತ ಹೇಳಿ ಕೊಟ್ಟಿದ್ವಾ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ನೀಡಿದ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಏನಿದೆ? ಡಿಕೆ ಬ್ರದರ್ಸ್ ಅವರನ್ನು ಟಾರ್ಗೆಟ್ ಮಾಡೋದೇ ಅಜೆಂಡಾ ಆಗಿದೆ ಎಂದರು.

ಮುನಿರತ್ನ ತಮ್ಮದೇ ಜಾತಿಯವರನ್ನ ನಿಂದಿಸಿದ್ದಾನೆ. ಕಾಂಗ್ರೆಸ್ ನವರು ಈ ರೀತಿ ಮಾಡಿದ್ದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ದರಾ? ಜಾತಿ ನಿಂದಿಸಿದವನನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ. ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದವರನ್ನು ಸಹಿಸಿಕೊಳ್ತಿರಾ ಎಂದು ಅವರು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು.

ಮುನಿರತ್ನ ಸಾಮಾನ್ಯ ವ್ಯಕ್ತಿಯಲ್ಲ. ಶಾಸಕರಾಗಿದ್ದವರು. ಅಲ್ಲದೇ ಸಾಕಷ್ಟು ಅನುಭವ ಇರುವ ರಾಜಕಾರಣಿ. ಅವರನ್ನು ಹೀಗೆ ಮಾಡು ಹಾಗೆ ಮಾಡು ಅಂತ ಹೇಳೋಕೆ ಆಗುತ್ತಾ? ಗುತ್ತಿಗೆದಾರನ ಬಳಿ ಲಂಚ ತಗೋ, ಜಾತಿ ನಿಂದನೆ ಮಾಡು ಅಂತ ನಾವು ಹೇಳಿಕೊಡೋಕೆ ಆಗುತ್ತಾ ಎಂದು ಅವರು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments