Thursday, December 25, 2025
Google search engine
HomeದೇಶBREAKING ಕಾಂಗ್ರೆಸ್ ಪಕ್ಷದಿಂದ ನವಜ್ಯೋತ್ ಸಿಂಗ್ ಸಿದ್ದು ದಂಪತಿ ಉಚ್ಚಾಟನೆ

BREAKING ಕಾಂಗ್ರೆಸ್ ಪಕ್ಷದಿಂದ ನವಜ್ಯೋತ್ ಸಿಂಗ್ ಸಿದ್ದು ದಂಪತಿ ಉಚ್ಚಾಟನೆ

ಮುಖ್ಯಮಂತ್ರಿ ಆಗಲು 500 ಕೋಟಿ ರೂ. ನೀಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ನವಜ್ಯೋತ್ ಸಿಂಗ್ ಸಿದು ದಂಪತಿಯನ್ನು ಪಕ್ಷದಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಛಾಟಿಸಲಾಗಿದೆ.

ಕೆಲವು ದಿನಗಳ ಹಿಂದೆ ಯಾವುದೇ ಪಕ್ಷದಲ್ಲಿ ಮುಖ್ಯಮಂತ್ರಿ ಆಗಬೇಕಾದರೂ 500 ಕೋಟಿ ರೂ. ನೀಡಬೇಕು. ನಮ್ಮ ಬಳಿ ಅಷ್ಟು ಹಣವಿಲ್ಲ ಎಂದು ನವಜ್ಯೋತ್ ಸಿಂಗ್ ಪತ್ನಿ ನವಜ್ಯೋತ್ ಕೌರ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ನವಜ್ಯೋತ್ ಸಿಂಗ್ ಸಿದ್ದು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರೆ ರಾಜಕಾರಣಕ್ಕೆ ಮರಳುತ್ತಾರೆ. ಪ್ರಸ್ತುತ ಸಿಎಂ ಸ್ಥಾನಕ್ಕೆ 5 ಮಂದಿ ನಡುವೆ ಪೈಪೋಟಿ ಇದೆ ಎಂದು ಅವರು ಹೇಳಿಕೆ ನೀಡಿದ್ದರು.

ನವಜ್ಯೋತ್ ಸಿಂಗ್ ಸಿದು ಪತ್ನಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ಸಿದ್ದು ಹಾಗೂ ಅವರ ಪತ್ನಿಯನ್ನು ಕಾಂಗ್ರೆಸ್ ಪಕ್ಷದಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments