Wednesday, December 24, 2025
Google search engine
Homeರಾಜ್ಯಪತ್ನಿ ಸಮಾಧಿ ಪಕ್ಕ ಮಣ್ಣಾದ ಶಾಮನೂರು ಶಿವಶಂಕರಪ್ಪ: ಗಣ್ಯರಿಂದ ಅಂತಿಮ ದರ್ಶನ

ಪತ್ನಿ ಸಮಾಧಿ ಪಕ್ಕ ಮಣ್ಣಾದ ಶಾಮನೂರು ಶಿವಶಂಕರಪ್ಪ: ಗಣ್ಯರಿಂದ ಅಂತಿಮ ದರ್ಶನ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಲಿಂಗಾಯತ- ವೀರಶೈವ ಸಂಪ್ರದಾಯದಂತೆ ನೆರವೇರಿತು.

ವಯೋ ಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಕಲ್ಲೇಶ್ವರ ಮಿಲ್ ಆವರಣದಲ್ಲಿ ಪತ್ನಿ ಸಮಾಧಿ ಪಕ್ಕ ಮಣ್ಣು ಮಾಡಲಾಯಿತು.

ಬಾಪೂಜಿ ವಿದ್ಯಾಸಂಸ್ಥೆ ಮೂಲಕ ದಾವಣಗೆರೆಯಲ್ಲಿ ರಾಜಕೀಯ ಭೀಷ್ಮನಂತೆ ಬೆಳೆದು ನಿಂತ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಬೂದಿ, ಬಿಲ್ವಪತ್ರೆ ಹಾಗೂ ಗಂಗಾಜಲದ ಮೂಲಕ ಮುಚ್ಚುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪಂಚಪೀಠಾಧೀಶ್ವ್ರದ ಪಾದೋದಕ ಮೂಲಕ ಪೂಜೆ ನೆರವೇರಿದ ನಂತರ ಪುತ್ರ ಹಾಗೂ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವು ಮುಖಂಡರು ದಾವಣಗೆರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments