Home ಮನರಂಜನೆ ಅಮ್ಮನಿಗಾಗಿ 1 ಕೋಟಿ ವೆಚ್ಚದಲ್ಲಿ ಲೀಲಾವತಿ ದೇವಸ್ಥಾನ ನಿರ್ಮಿಸಿದ ಪುತ್ರ ವಿನೋದ್ ರಾಜ್!

ಅಮ್ಮನಿಗಾಗಿ 1 ಕೋಟಿ ವೆಚ್ಚದಲ್ಲಿ ಲೀಲಾವತಿ ದೇವಸ್ಥಾನ ನಿರ್ಮಿಸಿದ ಪುತ್ರ ವಿನೋದ್ ರಾಜ್!

ಹಿರಿಯ ನಟಿ ಲೀಲಾವತಿ ಹಾಗೂ ಅಮ್ಮನ ಹೆಸರಿನಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲದ ಸೋಲದೇನಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ನಿರ್ಮಿಸಿದ ದೇವಸ್ಥಾನವನ್ನು ಉದ್ಘಾಟಿಸಲಾಗಿದೆ.

by Editor
0 comments
kannada actress leelavati

ಹಿರಿಯ ನಟಿ ಲೀಲಾವತಿ ಹಾಗೂ ಅಮ್ಮನ ಹೆಸರಿನಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲದ ಸೋಲದೇನಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ನಿರ್ಮಿಸಿದ ದೇವಸ್ಥಾನವನ್ನು ಉದ್ಘಾಟಿಸಲಾಗಿದೆ.

ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ದೇಗುಲವನ್ನು ವಿನೋದ್ ರಾಜ್ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ’ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ಹೆಸರಿಟ್ಟಿದ್ದಾರೆ.

ಜನಪ್ರಿಯ ನಟಿಯಾಗಿದ್ದರೂ ಕಷ್ಟಗಳನ್ನು ಕಂಡಿದ್ದ ಲೀಲಾವತಿ ನಂತರ ಫಿನಿಕ್ಸ್ ನಂತೆ ಮೇಲೆದ್ದು ಬಂದು ನೆಲೆ ಕಂಡು ಕೊಂಡಿದ್ದೂ ಅಲ್ಲದೇ ಬಡವರಿಗೆ ನೆರವಾಗಿ ಮಾನವೀಯತೆ ತೋರಿದ್ದರು. ನೆಲಮಂಗದಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಹೆರಿಗೆ ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಆರಂಭಿಸಿ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.

ಡಾ.ಲೀಲಾವತಿ ದೇಗುಲವನ್ನು ಡಿಸೆಂಬರ್ 5ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಉದ್ಘಾಟಿಸಿದರು. ಹೋಮ, ಹವನ ಮೂಲಕ ಪೂಜೆ ನೆರವೇರಿಸಿ ದೇವಸ್ಥಾನ ಆರಂಭಿಸಲಾಗಿದೆ.

banner

ಲೀಲಾವತಿ ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿ ದೇಗುಲಕ್ಕೆ ಸ್ಮಾರಕ ರೂಪ ನೀಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!