ಮಹತ್ವಾಕಾಂಕ್ಷಿ ಗಗನಯಾನ ಸಿದ್ಧತೆಗಳು ಶೇ.90ರಷ್ಟು ಪೂರ್ಣಗೊಂಡಿದ್ದು, 2027ರಲ್ಲಿ ಗಗನಯಾತ್ರೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ಮಾನವ ಸಹಿತ ಗಗನಯಾತ್ರೆ ಭಾರತದ ಮೊದಲ ಬಾಹ್ಯಕಾಶ ಪ್ರಯತ್ನವಾಗಿದ್ದು, ಎಲ್ಲಾ ಸಿದ್ಧತೆಗಳು ಸಮರ್ಪಕವಾಗಿ ನಡೆಯುತ್ತಿದೆ. ಅದರಲ್ಲೂ ತಂತ್ರಜ್ಞಾನ ಅಭಿವೃದ್ಧಿಯಿಂದ ಸಾಕಷ್ಟು ಸಹಾಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕೆಟ್ ಸಿದ್ಧಪಡಿಸುವುದು ಮಾನವರ ಕೆಲಸವಾಗಿದೆ. ರಾಕೆಟ್ ಮಾದರಿ ಸಿದ್ಧತೆ ಪ್ರಗತಿಯಲ್ಲಿದೆ. ಅಲ್ಲದೇ ಪರಿಸರಕ್ಕೆ ಹೊಂದಿಕೊಳ್ಳುವ ರಕ್ಷಣಾ ವ್ಯವಸ್ಥೆ ಕೂಡ ಪ್ರಗತಿ ಹಂತದಲ್ಲಿದೆ. ಗಗನಯಾತ್ರೆಯಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳ ಸುರಕ್ಷತೆ, ಸುರಕ್ಷಿತವಾಗಿ ಮರಳುವುದು ಮುಂತಾದ ಎಲ್ಲಾ ಸುರಕ್ಷಿತ ಕ್ರಮಗಳು ಸುಲಲಿತವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.
ಮಾನವ ಸಹಿತ ಗಗನಯಾನಕ್ಕೆ ಮುನ್ನ ಮಾನವ ರಹಿತ ಗಗನಯಾತ್ರೆ ನಡೆಯಲಿದೆ. ಈ ಪ್ರಯೋಗ ಯಶಸ್ವಿಗೊಂಡ ಬೆನ್ನಲ್ಲೆ ಅಂದರೆ 2027ರ ವೇಳೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.
ಇಸ್ರೋ ಪ್ರಕಾರ, ಈ ಪರೀಕ್ಷೆಯು ವಿಶಿಷ್ಟ ಕಾರ್ಯಾಚರಣೆಯ ಸನ್ನಿವೇಶಗಳಲ್ಲಿ ಒಂದಾದ ಗಗನಯಾನ ಕಾರ್ಯಾಚರಣೆಗಾಗಿ ಸಿಬ್ಬಂದಿ ಮಾಡ್ಯೂಲ್ನ ನಿರ್ಣಾಯಕ ಪ್ಯಾರಾಚೂಟ್-ಆಧಾರಿತ ಡಿಸೆಲರೇಶನ್ ಸಿಸ್ಟಮ್ನ ಎಂಡ್-ಟು-ಎಂಡ್ ಕಾರ್ಯಕ್ಷಮತೆಯ ಮೌಲ್ಯೀಕರಣದ ಉದ್ದೇಶವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.
“ಗಗನಯಾನ ಕಾರ್ಯಕ್ರಮಕ್ಕಾಗಿ, ಸಂಯೋಜಿತ ಏರ್ ಡ್ರಾಪ್ ಪರೀಕ್ಷೆ – ಏಕೆಂದರೆ ಸಂಪೂರ್ಣ ಮಾಡ್ಯೂಲ್ ಅಂತಿಮ ಹಂತದಲ್ಲಿ ಹಿಂತಿರುಗಿದಾಗ ಸರಿಯಾದ ಸ್ಪ್ಲಾಶ್ಡೌನ್ಗಾಗಿ ಸುಮಾರು ಒಂಬತ್ತು ಪ್ಯಾರಾಚೂಟ್ಗಳು ಸಿಂಕ್ರೊನೈಸ್ ಮಾಡಿದ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ – ಆದ್ದರಿಂದ ನಾವು ಹೆಲಿಕಾಪ್ಟರ್ ಬಳಸಿ ಸಿಮ್ಯುಲೇಟೆಡ್ ಮಾಡ್ಯೂಲ್ ಅನ್ನು ಭೂಮಿಯಿಂದ ಸುಮಾರು ಮೂರು ಕಿಲೋಮೀಟರ್ ಎತ್ತರಕ್ಕೆ ಎತ್ತಿದೆವು. ಒಂಬತ್ತು ಪ್ಯಾರಾಚೂಟ್ಗಳನ್ನು ಬಳಸಿ, ಅದನ್ನು ಯಶಸ್ವಿಯಾಗಿ ಕೆಳಗೆ ಹಾರಿಸಲಾಯಿತು,” ಎಂದು ಇಸ್ರೋ ಅಧ್ಯಕ್ಷರು ಹೇಳಿದರು.



