ಮಂಡಿ: ಸದಾ ಜನದಟ್ಟಣೆಯ ಮಂಡಿ-ಮನಾಲಿ ಹೆದ್ದಾರಿಯ ಸುರಂಗದೊಳಗೆ ಸತತ ಮಳೆಯಿಂದ ಉಂಟಾದ ಭೂಕುಸಿತದಲ್ಲಿ 250 ರಿಂದ 300 ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಹನೋಗಿ ಮತ್ತು ಪಾಂಡೋಹ್ನ ಎರಡೂ ತುದಿಗಳಿಂದ ಮಧ್ಯರಾತ್ರಿಯಿಂದ ನಿರ್ಬಂಧಿಸಲಾದ ಈ ಸುರಂಗವು ಕುಲ್ಲು ಮತ್ತು ಮಂಡಿಗೆ ಸಂಚಾರವನ್ನು ಕಡಿತಗೊಳಿಸಿದೆ.
ಅದೃಷ್ಟವಶಾತ್, ಸುರಂಗದ ಬಳಿಯಿರುವ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ. ಹನೋಗಿ ಮಾತಾ ದೇವಸ್ಥಾನದ ಬಳಿ ಸಿಲುಕಿರುವವರಿಗೆ ಅಧಿಕಾರಿಗಳು ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಒಬ್ಬ ವ್ಯಕ್ತಿಯ ಸಾವು ದೃಢಪಟ್ಟಿದ್ದು, 12 ರಿಂದ 13 ಜನರು ಕಾಣೆಯಾಗಿದ್ದಾರೆ. ಹನೋಗಿ ಬಳಿಯ 11 ಮತ್ತು 13 ಸಂಖ್ಯೆಯ ಸುರಂಗಗಳಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಕಾಯರ್ಾಚರಣೆಗಳು ನಡೆಯುತ್ತಿವೆ.
ಮಂಡಿ ಉಪ ಆಯುಕ್ತ ಅಪೂರ್ವ ದೇವಗನ್, `ಸುರಂಗಗಳ ಎರಡೂ ತುದಿಗಳು ಅವಶೇಷಗಳಿಂದ ಮುಚ್ಚಿಹೋಗಿವೆ. ಒಳಗೆ ಎಷ್ಟು ಜನರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ವ್ಯಾಪಕ ವಿನಾಶದ ಮಧ್ಯೆ ಈ ಘಟನೆ ನಡೆದಿದೆ. ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲಟರ್್ ಘೋಷಿಸಿ, ತೀವ್ರ ಮಳೆ, ಹಠಾತ್ ಪ್ರವಾಹ ಮತ್ತು ಭೂಕುಸಿತದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಪಾಲಂಪುರ್ನಲ್ಲಿ 76 ಮಿಮೀ, ಬಂಜಾರ್ನಲ್ಲಿ 75 ಮಿಮೀ ಮತ್ತು ಸಿಮರ್ೌರ್ನಲ್ಲಿ 55 ಮಿಮೀ ಮಳೆಯಾಗಿದೆ.
ಮಂಡಿಯಲ್ಲಿ ತೀವ್ರ ಹಾನಿ: ಮಂಡಿಯ ಸ್ಯಾಥಿ ಗ್ರಾಮದ ಲಾಂಗ್ನಿ ಪಂಚಾಯತ್ನಲ್ಲಿ ಭಾರೀ ಮಳೆಯಿಂದ ಒಂದು ಡಜನ್ ಮನೆಗಳು, ಗೋಶಾಲೆಗಳು, ಗೂಳಿಗಳು, ಕುದುರೆಗಳು ಮತ್ತು ಆಡುಗಳು ಕೊಚ್ಚಿಕೊಂಡು ಹೋಗಿವೆ. ಕುಕ್ಲಾಹ್ನಲ್ಲಿ 10 ಮನೆಗಳು ಮತ್ತು ಒಂದು ಸೇತುವೆ ಜಲಪ್ರವಾಹಕ್ಕೆ ಕೊಚ್ಚಿಕೊಂಡಿವೆ. 16 ಮೆಗಾವ್ಯಾಟ್ನ ಪಟಿಕಾರಿ ಜಲವಿದ್ಯುತ್ ಯೋಜನೆಯೂ ಜಲಪ್ರವಾಹದಿಂದ ಹಾನಿಗೊಳಗಾಗಿದೆ.
ಮಂಡಿ ಪಟ್ಟಣದ ಜೈಲ್ ರಸ್ತೆಯಲ್ಲಿ ಭೂಕುಸಿತದಿಂದ ಒಂದು ಡಜನ್ ವಾಹನಗಳು ಹಿಮ ಧೂಳಿಗೆ ಸಿಲುಕಿವೆ. ರಕ್ಷಣಾ ಕಾಯರ್ಾಚರಣೆ: ರಕ್ಷಣಾ ಕಾಯರ್ಾಚರಣೆಗಳು ತೀವ್ರಗೊಂಡಿದ್ದು, ರಾಘುನಾಥ್ ಕಾ ಪಧಾರ್ನಿಂದ 14 ಮಂದಿಯನ್ನು ಮತ್ತು ಪುರಾಣಿ ಮಂಡಿಯಿಂದ 11 ಜನರನ್ನು ರಕ್ಷಿಸಲಾಗಿದೆ.
ಮಂಡಿ, ಕಾಂಗ್ರಾ ಮತ್ತು ಹಮಿರ್ಪುರ್ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೂನ್ 28ರಂದು ತಾತ್ಕಾಲಿಕ ಬಿಡುವು ನಿರೀಕ್ಷಿತವಾದರೂ, ಜೂನ್ 29 ಮತ್ತು 30ರಂದು ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಐಎಂಡಿಯು ಮಧ್ಯ-ಗುಡ್ಡಗಾಡು ಮತ್ತು ಎತ್ತರದ ಪ್ರದೇಶಗಳಲ್ಲಿ ತೀವ್ರ ಮಳೆಗೆ ಕಿತ್ತಳೆ ಎಚ್ಚರಿಕೆಯನ್ನು ಜಾರಿಗೊಳಿಸಿದೆ



