Home ತಾಜಾ ಸುದ್ದಿ ತಲೆ ಕೂದಲು ಕಟಿಂಗ್ ಮಾಡೋಕೆ ಟೈಂ ಕೊಡ್ತೀನಿ ಬನ್ನಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಧು ಬಂಗಾರಪ್ಪ ತಿರುಗೇಟು

ತಲೆ ಕೂದಲು ಕಟಿಂಗ್ ಮಾಡೋಕೆ ಟೈಂ ಕೊಡ್ತೀನಿ ಬನ್ನಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಧು ಬಂಗಾರಪ್ಪ ತಿರುಗೇಟು

by Editor
0 comments
kannada vahini madhu bangarappa

ನನ್ನ ತಲೆಕೂದಲಿನ ವಿನ್ಯಾಸದ ಬಗ್ಗೆ ಮಾತನಾಡೋಕೆ ಬೇರೆ ಕೆಲಸ ಇಲ್ಲವಾ? ಅಷ್ಟೋಂದು ಆಸಕ್ತಿ ಇದ್ದರೆ ಟೈಂ ಕೊಡ್ತೀನಿ ಬಂದು ಕಟಿಂಗ್ ಮಾಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರಿಗೆ ವಿಜಯೇಂದ್ರ ನಿಮಗೆ ಕಟಿಂಗ್ ಮಾಡಿಕೊಳ್ಳೋಕೆ ಹಣ ಇಲ್ಲ ಅಂತ ಕಾಣುತ್ತೆ. ನಾವೇ ಹಣ ಸಂಗ್ರಹಿಸಿ ಪ್ರತಿ ತಿಂಗಳು ಕಟಿಂಗ್ ಮಾಡಿಸಿಕೊಳ್ಳೋಕೆ ಕೊಡ್ತೀವಿ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಬಿಜೆಪಿಯವರಿಗೆ ಮಾಡಲು ಏನು ಕೆಲಸ ಇಲ್ಲವಾ? ಕೇವಲ ವೈಯಕ್ತಿಕ ಟೀಕೆ ಮಾಡೋದೇ ಆಗೋಯ್ತು. ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತನಾಡಿದ್ದಕ್ಕೆ 110ರಿಂದ 63ಕ್ಕೆ ಬಂದಿದ್ದೀರಿ. ಈಗ ನನ್ನ ಕಟಿಂಗ್ ಬಗ್ಗೆ ಮಾತನಾಡಿ 26ರಿಂದ 6ಕ್ಕೆ ಬರ್ತಾರೆ ನೋಡಿ ಎಂದು ಅವರು ಹೇಳಿದರು.

ಬಿಜೆಪಿಯವರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆದರೆ ಬೇಡದೇ ಇರುವ ವಿಚಾರಗಳ ಬಗ್ಗೆನೇ ಮಾತನಾಡುತ್ತಾರೆ. ಈ ಹಿಂದೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕೇಶವಿನ್ಯಾಸದ ಬಗ್ಗೆಯೂ ಮಾತನಾಡಿದ್ದರು. ಕೊರೊನಾ ಟೈಮಲ್ಲಿ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದು ಯಾಕೆ ಅಂತ ಇವರ್ಯಾರು ಯಾಕೆ ಕೇಳಲಿಲ್ಲ. ನಾವು ಕೇಳಿದ್ದಿವಾ? ಬಾಯಿಗೆ ಬಂದಂತೆ ಮಾತನಾಡೋದು ನಿಲ್ಲಿಸಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!