Home ತಾಜಾ ಸುದ್ದಿ ಸಮುದ್ರ ಮಟ್ಟ ಏರಿಕೆಯಿಂದ ಬ್ಯಾಂಕಾಕ್ ಮುಳುಗಡೆ: ತಜ್ಞರ ಎಚ್ಚರಿಕೆ

ಸಮುದ್ರ ಮಟ್ಟ ಏರಿಕೆಯಿಂದ ಬ್ಯಾಂಕಾಕ್ ಮುಳುಗಡೆ: ತಜ್ಞರ ಎಚ್ಚರಿಕೆ

by Editor
0 comments

ಸಮುದ್ರ ಮಟ್ಟದಲ್ಲಿ ಏರುತ್ತಿರುವುದರಿಂದ ಶೀಘ‍್ರದಲ್ಲೇ ಬ್ಯಾಂಕಾಕ್ ಮುಳುಗಡೆ ಆಗಲಿದ್ದು, ಪರ್ಯಾಯ ಥಾಯ್ಲೆಂಡ್ ಪರ್ಯಾಯ ರಾಜಧಾನಿಯತ್ತ ಗಮನಹರಿಸಬೇಕಾಗಿದೆ ಎಂದು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಹವಾಮಾನ ವೈಪರಿತ್ಯದಿಂದ ಈ ಶತಮಾನದ ಅಂತ್ಯದ ವೇಳೆಗೆ ಸಮುದ್ರ ಮಟ್ಟದಲ್ಲಿರುವ ಬ್ಯಾಂಕಾಕ್ ಮುಳುಗಡೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಸ್ಥಳಾಂತರ ಮಾಡಲು ಚಿಂತನೆ ನಡೆದಿದೆ ಎಂದು ಥಾಯ್ಲೆಂಡ್ ನ  ಹವಾಮಾನ ಬದಲಾವಣೆ ಅಧಿಕಾರಿ ತಿಳಿಸಿದ್ದಾರೆ.

ಬ್ಯಾಂಕಾಕ್ ಈಗಾಗಲೇ ಭಾರೀ ಮಳೆಯಿಂದ ಪದೇಪದೆ ಉದ್ಭವಾಗುತ್ತಿರುವ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ಪ್ರಸ್ತುತ ಜಗತ್ತು ಹೆಚ್ಚು ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದು, ಬ್ಯಾಂಕಾಕ್ ಕೂಡ ಇದರಿಂದ ಹೊರತಾಗಿಲ್ಲ ಎಂದು ಸರ್ಕಾರದ ಹವಾಮಾನ ಬದಲಾವಣೆ ಇಲಾಖೆಯ ಪ್ರಧಾನ ನಿರ್ದೇಶಕ ಪವಿಚ್ ಕೆಸವವಾಂಗ್ ವಿವರಿಸಿದ್ದಾರೆ.

ಬ್ಯಾಂಕಾಕ್ ನಲ್ಲಿ ಈಗಾಗಲೇ ಸಾಮಾನ್ಯಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿದೆ. ಹೊಸ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಲೇಬೇಕಾಗಿದೆ. ಪ್ರಸ್ತುತ ಬ್ಯಾಂಕಾಕ್ ಈಗಾಗಲೇ ಬಹುತೇಕ ಮುಳುಗಡೆ ಆಗಿದೆ. ನಾವು ಶೀಘ್ರದಲ್ಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

banner

ಹಾಲೆಂಡ್ ಮಾದರಿಯಲ್ಲಿ ನಾವು ಕೊಳವೆ ಕೊರೆಸುವುದು ಸೇರಿದಂತೆ ಹಲವು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಆದರೆ ಅಂತಿಮವಾಗಿ ನಾವು ಬೇರೊಂದು ರಾಜಧಾನಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರ ಆಗುವುದು ಉತ್ತಮವಾಗಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ವಾಹನ ಸವಾರರಿಗೆ ಬಿಗ್ ಶಾಕ್: ವಾಹನ ಮಾರಿದ 14 ದಿನದಲ್ಲಿ ದಾಖಲೆ ವರ್ಗಾವಣೆ ಕಡ್ಡಾಯ! ಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ ಫಿನಾಲೆ ಹೊಸ್ತಿಲಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್! ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ? ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಪ್ರತಿಭಟನೆ ಬಿಸಿ: ಬೀದಿಗಿಳಿದ ಸಾವಿರಾರು ಅಮೆರಿಕನ್ನರು ಫೆ.14ರಂದು ರೈತರ ಬೇಡಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ: ವೈದ್ಯ ನೆರವು ಪಡೆಯಲು ಜಗಜೀತ್ ಒಪ್ಪಿಗೆ ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿರಿಸಿದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ: ಮೊದಲ ಫೋಟೊ ಬಿಡುಗಡೆ ಕೇಂದ್ರ ಆದಿವಾಸಿ ಜನಜಾತಿ ನ್ಯಾಯ ಅಭಿಯಾನಕ್ಕೆ ಮಂಡ್ಯದ ಪೂವನಹಳ್ಳಿ ಆಯ್ಕೆ: ಎಚ್.ಡಿ. ಕುಮಾರಸ್ವಾಮಿ ಘೋಷಣೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅಜ್ಜಿ, ಚಿಕ್ಕಪ್ಪ ಅಪಘಾತದಲ್ಲಿ ದುರ್ಮರಣ ಮಹಾಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ: ಹಲವು ಶಿಬಿರಗಳಿಗೆ ವ್ಯಾಪಿ