Home ತಾಜಾ ಸುದ್ದಿ ನಿಗದಿಗಿಂತ ಹೆಚ್ಚು ವಿದ್ಯುತ್ ಬಳಕೆ: ಬೆಂಗಳೂರಿನ 11 ಲಕ್ಷ ಗ್ರಾಹಕರಿಗೆ ದಂಡ!

ನಿಗದಿಗಿಂತ ಹೆಚ್ಚು ವಿದ್ಯುತ್ ಬಳಕೆ: ಬೆಂಗಳೂರಿನ 11 ಲಕ್ಷ ಗ್ರಾಹಕರಿಗೆ ದಂಡ!

by Editor
0 comments

ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸಿದ್ದಕ್ಕಾಗಿ ಬೆಂಗಳೂರಿನ ಸುಮಾರು 11 ಲಕ್ಷ ಗ್ರಾಹಕರು ಬೆಸ್ಕಾಂಗೆ ದಂಡ ಪಾವತಿಸಿದ್ದಾರೆ.

2024ರ ಜನವರಿ ಮತ್ತು ಫೆಬ್ರವರಿಯಲ್ಲಿ ಸುಮಾರು 11 ಲಕ್ಷ ಗ್ರಾಹಕರು ವಿದ್ಯುತ್ ಬಳಕೆಗೆ ಪಡೆದ ಅನುಮತಿಗಿಂತ ಹೆಚ್ಚು ವಿದ್ಯುತ್ ಬಳಸಿದ್ದಕ್ಕಾಗಿ ದಂಡ ಪಾವತಿಸಿದ್ದಾರೆ. ಬರಗಾಲ ಹಾಗೂ ಬಿಸಿಗಾಳಿ ಸಮಸ್ಯೆಯಿಂದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ದಂಡ ಪಾವತಿಸುವವರ ಸಂಖ್ಯೆ ಮತ್ತು ದಂಡದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವಿದ್ಯುತ್ ಬಳಕೆಗೆ ನಿಗದಿತ ಪ್ರಮಾಣದ ವೋಲ್ಟೇಜ್ ಗೆ ಅನುಮತಿ ಪಡೆಯುತ್ತಾರೆ. ಆದರೆ ಬಳಕೆ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಗ್ರಾಹಕರಿಗೆ ವಿದ್ಯುತ್ ಬಳಕೆಯ ಪ್ರಮಾಣ ಅರಿತು ಹೆಚ್ಚು ವೋಲ್ಟೇಜ್ ವಿದ್ಯುತ್ ಬಳಕೆಗೆ ಅನುಮತಿ ಪಡೆಯುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ದಂಡ ಪಾವತಿಸಿದವರಲ್ಲಿ ಹೆಚ್ಚಿನವರು ಮನೆಗೆ ವಿದ್ಯುತ್ ಸಂಪರ್ಕ ಪಡೆದವರಾಗಿದ್ದಾರೆ. ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ ಹೊಸ ಎಲೆಕ್ಟ್ರಾನಿಕ್ ಉಪಕರಣ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

banner

ಬೆಂಗಳೂರಿನಲ್ಲಿ ಬಹುತೇಕ ಮನೆಗಳು 20ರಿಂದ 30 ವರ್ಷ ಹಳೆಯದಾಗಿವೆ. ಆಗಿನ ಕಾಲಕ್ಕೆ ತಕ್ಕಂತೆ 2ರಿಂದ 3 ಕಿಲೋ ವ್ಯಾಟ್ ವಿದ್ಯುತ್ ಬಳಕೆಗೆ ಅನುಮತಿ ಪಡೆದಿದ್ದರು. ಆದರೆ ಈಗ ಬಳಕೆ ಪ್ರಮಾಣ ಹೆಚ್ಚಾಗಿದೆ. ಹಳೆಯ ಉಪಕರಣಗಳು ಹೆಚ್ಚು ಒತ್ತಡ ತಡೆಯುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ರಷ್ಯಾ ಸೇನೆಯಲ್ಲಿದ್ದ 12 ಭಾರತೀಯರು ಸಾವು, 16 ಮಂದಿ ಕಣ್ಮರೆ: ಕೇಂದ್ರ ಕೊಟ್ಟ ಕೆಲಸ ಬಾಯಿ ಮುಚ್ಚಿಕೊಂಡು ಮಾಡಿ: ಕೈ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ 5 ನಿಮಿಷದಲ್ಲಿ 12 ಕೋಟಿ ಚಿನ್ನಾಭರಣ ಲೂಟಿ: ದರೋಡೆಕೋರರ ಮಾಸ್ಟರ್ ಪ್ಲಾನ್! ಗರ್ಭಿಣಿಯರಿಗೆ 21,000, ಬಡ ಮಹಿಳೆಯರಿಗೆ 2500 ರೂ.: ಬಿಜೆಪಿ ಚುನಾವಣಾ ಪ್ರಣಾಳಿಕೆ ಘೋಷಣೆ ಬೀದರ್ ನಂತರ ಮಂಗಳೂರಿನಲ್ಲಿ ಹಾಡುಹಗಲೇ ಮುಸುಕುಧಾರಿಗಳಿಂದ ಬ್ಯಾಂಕ್ ದರೋಡೆ! ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ನುಡಿದಂತೆ ನಡೆದ ಸಿಎಂ 5 ಗಂಟೆ ಶಸ್ತ್ರಚಿಕಿತ್ಸೆ ನಂತರ ಸೈಫ್ ದೇಹದಿಂದ 2.5 ಇಂಚು ಉದ್ದದ ಚಾಕು ಹೊರತೆಗೆದ ವೈದ್ಯರು! ಫೆ.1ರಿಂದ ಏರ್ ಶೋ: ಯಲಹಂಕದ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಚಟುವಟಿಕೆ ಸ್ಥಗಿತಕ್ಕೆ ಸೂಚನೆ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ: ಸಚಿವ ಆರ್ ಬಿ ತಿಮ್ಮಾಪೂರ ನನ್ನ ಖಾಸಗಿ ವೀಡಿಯೊಗಳನ್ನು ಮರಳಿಸಿ: ಪ್ರಜ್ವಲ್ ರೇವಣ್ಣ ಮನವಿಗೆ ಹೈಕೋರ್ಟ್ ಚಾಟಿ!