Sunday, June 28, 2026
Google search engine
Homeರಾಜ್ಯಡಿಸಿಸಿ ಬ್ಯಾಂಕ್ ಹಗರಣ: ಬೆಂಗಳೂರು, ಶಿವಮೊಗ್ಗ ಸೇರಿ 8 ಕಡೆ ಇಡಿ ದಾಳಿ

ಡಿಸಿಸಿ ಬ್ಯಾಂಕ್ ಹಗರಣ: ಬೆಂಗಳೂರು, ಶಿವಮೊಗ್ಗ ಸೇರಿ 8 ಕಡೆ ಇಡಿ ದಾಳಿ

ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಮಂಗಳವಾರ ಬೆಳಿಗ್ಗೆ ಬೆಂಗಳೂರು, ಶಿವಮೊಗ್ಗ ಸೇರಿದಂತೆ 8 ಕಡೆ ದಾಳಿ ನಡೆಸಿದೆ.

ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಇಟ್ಟು 62 ಕೋಟಿ ರೂ. ಸಾಲ ಪಡೆದ ಹಗರಣದ ಕುರಿತು ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಡಿಸಿ ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದು ಅಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ನಲ್ಲಿ ವಿಚಾರಣೆ ನಡೆಸಿದೆ.

ಡಿಸಿಸಿ ಬ್ಯಾಂಕ್ ಶಿವಮೊಗ್ಗ ಶಾಖೆಯ ಮ್ಯಾನೇಜರ್ ಶೋಭಾ, ಕಾರು ಚಾಲಕ ಶಿವಕುಮಾರ್ ಹಾಗೂ ಜನರಲ್ ಮ್ಯಾನೇಜರ್ ನಾಗಭೂಷಣ್ ಮುಂತಾದವರ ಮನೆಗಳ ಮೇಲೆ ಇಡಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ.

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಕಚೇರಿ ಹಾಗೂ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments