Home ಕ್ರೀಡೆ ಟಿ-20 ವಿಶ್ವಕಪ್ ನಲ್ಲಿ ಭಾರತ ಶುಭಾರಂಭ, ಐರ್ಲೆಂಡ್ ಗೆ 8 ವಿಕೆಟ್ ಸೋಲು!

ಟಿ-20 ವಿಶ್ವಕಪ್ ನಲ್ಲಿ ಭಾರತ ಶುಭಾರಂಭ, ಐರ್ಲೆಂಡ್ ಗೆ 8 ವಿಕೆಟ್ ಸೋಲು!

by Editor
0 comments

ನಾಯಕ ರೋಹಿತ್ ಶರ್ಮ ಅರ್ಧಶತಕ ಹಾಗೂ ಬೌಲರ್ ಗಳ ಸಹಾಯದಿಂದ ಭಾರತ ತಂಡ 8 ವಿಕೆಟ್ ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.

ನ್ಯೂಯಾರ್ಕ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 16 ಓವರ್ ಗಳಲ್ಲಿ 96 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಸುಲಭ ಗುರಿಯನ್ನು 12.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.

ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಬಾರಿ ಔಟಾಗಿದ್ದರಿಂದ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ಎರಡನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್ ಮತ್ತು ನಾಯಕ ರೋಹಿತ್ ಶರ್ಮ 2ನೇ ವಿಕೆಟ್ ಗೆ 54 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.

ರೋಹಿತ್ ಶರ್ಮ ಭುಜಕ್ಕೆ ಚೆಂಡು ಬಡಿದು ಗಾಯಗೊಂಡು ನಿವೃತ್ತಿ ಆಗುವ ಮುನ್ನ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರು. ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿದರು. ಸೂರ್ಯಕುಮಾರ್ (2) ವಿಫಲರಾದರು.

banner

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ಜಸ್ ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು.  ಬುಮ್ರಾ 6 ರನ್ ನೀಡಿ 2 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ಮತ್ತು ಅರ್ಷದೀಪ್ ಸಿಂಗ್ 2 ವಿಕೆಟ್ ಗಳಿಸಿದರು. ಐರ್ಲೆಂಡ್ ಪರ ಗೆರಾಥ್ ಡೆಲಾನಿ 25 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ತಂಡದ ಮೊತ್ತ 100ರ ಗಡಿ ದಾಟಲಿಲ್ಲ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!